(ಕಾಯಪAಡ ಶಶಿ ಸೋಮಯ್ಯ)
ಮಡಿಕೇರಿ, ನ. ೨೭ : ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆ.ಎಸ್.ಸಿ.ಎ.) ಮೂಲಕ ಕೊಡಗು ಜಿಲ್ಲೆಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಕ್ರಿಕೆಟ್ ಸ್ಟೇಡಿಯಂ ಕಾಮಗಾರಿ ಇದೀಗ ಆರಂಭಗೊAಡಿದೆ. ಇದು ಹಲವು ವರ್ಷಗಳ ಹಿಂದಿನ ಯೋಜನೆಯಾಗಿದ್ದರೂ ಕೆಲವಾರು ಕಾರಣಗಳಿಂದಾಗಿ ವಿಳಂಬವಾಗುತ್ತಲೇ ಬಂದಿತ್ತು. ಜಾಗದ ವಿವಾದ ಇಲ್ಲಿ ಸಮಸ್ಯೆಯಾಗಿದ್ದು ನಂತರದಲ್ಲಿ ರಾಜ್ಯ ಉಚ್ಛ ನ್ಯಾಯಾಲಯದ ನಿರ್ದೇಶನದಂತೆ ಕೊಡಗು ಜಿಲ್ಲಾಡಳಿತ ಉದ್ಭವಿಸಿದ್ದ ಸಮಸ್ಯೆಗಳನ್ನು ಸರಿಪಡಿಸಿ ಜಾಗದ ದಾಖಲೆಯನ್ನು ಕಳೆದ ಕೆಲವು ತಿಂಗಳುಗಳ ಹಿಂದೆ ಕೆ.ಎಸ್.ಸಿ.ಎ.ಗೆ ಅಧಿಕೃತವಾಗಿ ಹಸ್ತಾಂತರ ಮಾಡಿತ್ತು. ಜಾಗವನ್ನು ಸುಪರ್ದಿಗೆ ಪಡೆದುಕೊಂಡ ಬಳಿಕ ಕೆ.ಎಸ್.ಸಿ.ಎ. ವತಿಯಿಂದ ಜಾಗದ ಸುತ್ತಲೂ ತಡೆಗೋಡೆ ನಿರ್ಮಾಣಮಾಡಿ ಸಿ.ಸಿ. ಟಿ.ವಿ. ಅಳವಡಿಕೆಯೊಂದಿಗೆ ಸಂರಕ್ಷಿಸಲಾಗಿತ್ತು. ಕೆಲ ಸಮಯದ ಹಿಂದೆಯೇ ಅಧಿಕೃತವಾಗಿ ಕಾಮಗಾರಿ ಆರಂಭವಾಗ ಬೇಕಿತ್ತಾದರೂ ನಿರಂತರ ಮಳೆಯ ಕಾರಣದಿಂದಾಗಿ ಈತನಕವೂ ಕೆಲಸ ವಿಳಂಬವಾಗಿತ್ತು. ಇದೀಗ ಬೃಹತ್ ಯಂತ್ರೋಪಕರಣಗಳು ಸ್ಥಳಕ್ಕೆ ಆಗಮಿಸಿವೆ. ಪ್ರಸ್ತುತ ಮೈದಾನ ಸಮತಟ್ಟುಗೊಳಿಸುವ ಕಾಮಗಾರಿ ಪ್ರಾರಂಭಿಸಲಾಗಿದೆ. ಇದಾದ ಬಳಿಕ ಹಂತ ಹಂತವಾಗಿ ಇತರ ಕೆಲಸಗಳು ಆರಂಭವಾಗಲಿವೆ. ಹೊದ್ದೂರು ಗ್ರಾಮದ ಸರ್ವೆ ನಂ. ೬೭/೧ಎಯ ೧೧.೭೦ ಜಾಗದಲ್ಲಿ ಅಂತರರಾಷ್ಟಿçÃಯ ಗುಣಮಟ್ಟದ ಕ್ರಿಕೆಟ್ ಸ್ಟೇಡಿಯಂ ಕೊಡಗಿಗೆ ಕೆ.ಎಸ್.ಸಿ.ಎ.ಯ ಕೊಡುಗೆಯಾಗಲಿದೆ. ಸುಮಾರು ರೂ. .೫೦ ಕೋಟಿಗೂ ಅಧಿಕ ವೆಚ್ಚದ ಯೋಜನೆ ಇದಾಗಿದ್ದು ಕಾಮಗಾರಿ ಪೂರ್ಣಗೊಳ್ಳಲು ಮುಂದಿನ ಎರಡು ವರ್ಷದ ಅವಧಿ ಬೇಕಾಗಲಿದೆ ಎನ್ನಲಾಗಿದೆ. ಏಕೆಂದರೆ ಕೊಡಗಿನಲ್ಲಿ ಮಳೆಯ ಕಾರಣದಿಂದಾಗಿ ಕೆಲವು ತಿಂಗಳುಗಳ ಕಾಲ ಕೆಲಸ ನಡೆಸುವುದು ದುಸ್ತರವಾಗಲಿ ರುವುದರಿಂದ ಹೆಚ್ಚಿನ ಕಾಲಾವಕಾಶದ ಅಗತ್ಯವಿದೆ. ಅಂತರರಾಷ್ಟಿçÃಯ ಗುಣಮಟ್ಟದ ಈ ಸ್ಟೇಡಿಯಂ ನಿರ್ಮಾಣವಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ೭೪ ಮೀಟರ್ ಸುತ್ತಳತೆಯದ್ದಾದರೆ, ಹೊದ್ದೂರಿನ ಈ ಕ್ರೀಡಾಂಗಣ ೮೦ ಮೀಟರ್ನಷ್ಟು ವಿಶಾಲವಾಗಿರಲಿದೆ.
ಸ್ಟೇಡಿಯಂ ಪೂರ್ಣಗೊಂಡ ಬಳಿಕ ಭವಿಷ್ಯದಲ್ಲಿ ಯುವ ಕ್ರಿಕೆಟ್ ಪ್ರತಿಭೆಗಳಿಗೆ ವರದಾನವಾಗಲಿದೆ. ರಾಜ್ಯ ಪ್ರತಿಷ್ಠಿತ ಸ್ಟೇಡಿಯಂಗಳ ಪಟ್ಟಿಯಲ್ಲಿ ಇದೂ ಒಂದಾಗಲಿದ್ದು, ಮುಂದಿನ ದಿನಗಳಲ್ಲಿ ರಣಜಿ ಟ್ರೋಫಿ, ಕೆ.ಪಿ.ಎಲ್.ನಂತಹ ಪ್ರಮುಖ
(ಮೊದಲ ಪುಟದಿಂದ) ಪಂದ್ಯಾವಳಿಗಳೂ ಇಲ್ಲಿ ನಡೆಯುವ ಆಶಾಭಾವನೆಯಿದೆ. ಸದ್ಯದ ಮಟ್ಟಿಗೆ ಸುಮಾರು ೨೦ ಸಾವಿರ ಜನರಿಗೆ ಸ್ಥಳಾವಕಾಶ ವಿರುವಂತೆ ಈ ಸ್ಟೇಡಿಯಂ ತಲೆ ಎತ್ತಲಿದೆ.
ಏನೇನು ಬರಲಿದೆ ?
ಸ್ಟೇಡಿಯಂನಲ್ಲಿ ಈಜು ಕೊಳ, ಹಲವಷ್ಟು ಸುಸಜ್ಜಿತ ಕೊಠಡಿಗಳು, ರಿಕ್ರಿಯೇಷನ್ ಕ್ಲಬ್, ಒಳಾಂಗಣ ಕ್ರೀಡೆಗಳಾದ ಶಟಲ್, ಸ್ಕಾ÷್ವಷ್, ಬಾಸ್ಕೆಟ್ ಬಾಲ್, ಜಿಮ್ ಸೇರಿದಂತೆ ಇನ್ನಿತರ ಕ್ರೀಡಾ ಸೌಲಭ್ಯಗಳು ಇಲ್ಲಿರಲಿದೆ. ಪ್ರಮುಖವಾಗಿ ನುರಿತ ತರಬೇತುದಾರರಿಂದ ಕ್ರಿಕೆಟ್ ಶಿಬಿರಗಳು, ಆಯ್ಕೆ ಶಿಬಿರಗಳು, ಮತ್ತಿತರ ಕೆಲವಾರು ಪಂದ್ಯಾಟಗಳು ಇಲ್ಲಿ ನಡೆಯುವ ಸಾಧ್ಯತೆಗಳಿದ್ದು, ಯುವ ಪ್ರತಿಭೆಗಳಿಗೆ ಸದುಪಯೋಗ ವಾಗಲಿದೆ.
ಕೆ.ಎಸ್.ಸಿ.ಎ. ಉತ್ಸುಕತೆ
ಕ್ರೀಡಾ ಜಿಲ್ಲೆ ಎಂದೆನಿಸಿರುವ ಕೊಡಗಿನಲ್ಲಿ ನೂತನ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಕೆ.ಎಸ್.ಸಿ.ಎ. ಸಂಸ್ಥೆ ಆರಂಭ ದಿಂದಲೂ ಉತ್ಸುಕತೆ ತೋರುತ್ತಿದೆ. ಕೆ.ಎಸ್.ಸಿ.ಎ.ಯ ಹಿಂದಿನ ಅಧ್ಯಕ್ಷ ಬ್ರಿಜೇಶ್ ಪಟೇಲ್ ಅವರು ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿದ್ದರು. ಈಗಿನ ಅಧ್ಯಕ್ಷ ರಘುರಾಮ ಭಟ್, ಉಪಾಧ್ಯಕ್ಷ ಬಿ.ಕೆ. ಸಂಪತ್, ಕಾರ್ಯದರ್ಶಿ ಶಂಕರ್, ಜಂಟಿ ಕಾರ್ಯದರ್ಶಿ ಶಾವಿರ್ ತರಡೋರ್, ಖಜಾಂಚಿ ಜಯರಾಂ ಅವರುಗಳೂ ಆಸಕ್ತಿ ತೋರುತ್ತಿದ್ದಾರೆ.