*ಗೋಣಿಕೊಪ್ಪ, ನ. ೨೯: ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ, ಸುಬ್ರಹ್ಮಣ್ಯ ಷಷ್ಠಿ ಉತ್ಸವ ಡಿಸೆಂಬರ್ ೪ ರಿಂದ ೮ರವರೆಗೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಮನೆಯಪಂಡ ಮೇಜರ್ ಬೋಪಣ್ಣ ಮಾಹಿತಿ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾ ೭ರಂದು ಚಂಪಾಷಷ್ಠಿ ನಡೆಯಲಿದೆ, ಇದರ ಪ್ರಯುಕ್ತ ಡಿಸೆಂಬರ್ ೪ರಿಂದಲೇ ದೇವಸ್ಥಾನದಲ್ಲಿ ವಿವಿಧ ಪೂಜಾ ಕಾರ್ಯಗಳು ನೆರವೇರಲಿವೆ ಎಂದು ತಿಳಿಸಿದರು. ಡಿಸೆಂಬರ್ ೪ರಂದು ಬೆಳಗ್ಗೆ ೭ ಗಂಟೆಗೆ ಗಣಪತಿ ಹೋಮ, ಸಂಜೆ ೭ ಗಂಟೆಗೆ ದೀಪಾರಾಧನೆ ನಂತರ ೮ ಗಂಟೆಗೆ ಮಹಾಮಂಗಳಾರತಿ ನಡೆಯಲಿದೆ.

ಡಿ. ೫ ರಂದು ಪ್ರಾತಕಾಲ ೫ಕ್ಕೆ ಇರುಬೆಳಕು, ದೇವರ ಪ್ರದಕ್ಷಿಣೆ, ಮಧ್ಯಾಹ್ನ ೧೨.೩೦ಕ್ಕೆ ಮಹಾಮಂಗಳಾರತಿ, ರಾತ್ರಿ ೭ಕ್ಕೆ ದೀಪಾರಾಧÀನೆ, ದೇವರ ಪ್ರದಕ್ಷಿಣೆ, ಎಂಟು ಗಂಟೆಗೆ ಮಹಾಮಂಗಳಾರತಿ ನಡೆಯಲಿದೆ. ಡಿ. ೬ ರಂದು ಬೆಳಗ್ಗೆ ೫ಕ್ಕೆ ದೇವರ ಪ್ರದಕ್ಷಿಣೆ, ಮಧ್ಯಾಹ್ನ ೧೨.೩೦ಕ್ಕೆ ಮಹಾಮಂಗಳಾರತಿ, ರಾತ್ರಿ ೭ ಕ್ಕೆ ದೇವರ ಪ್ರದಕ್ಷಿಣೆ, ರಾತ್ರಿ ೮ ಗಂಟೆಗೆ ಮಹಾಮಂಗಳಾರತಿ ಪೂಜಾ ಕಾರ್ಯಗಳು ನೆರವೇರಲಿವೆ.

ತಾ ೭ರಂದು ನಡೆಯುವ ಚಂಪಾಷಷ್ಠಿ ಯಂದು ಪಾತಃಕಾಲ ಬೆಳಿಗ್ಗೆ ೫ ಕ್ಕೆ ಇರುಬೆಳಕು, ದೇವರ ಪ್ರದಕ್ಷಿಣೆ ನಂತರ ಭಕ್ತಾದಿಗಳಿಂದ ಸುಬ್ರಹ್ಮಣ್ಯ ದೇವರಿಗೆ ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಎಳನೀರು ಅಭಿಷೇಕ, ಹಣ್ಣುಕಾಯಿ, ಹರಕೆ, ತುಲಾಭಾರ, ತಲೆಮುಡಿ, ಆಳುರೂಪ ಸೇವೆಗಳು, ಮಧ್ಯಾಹ್ನ ೧.೩೦ಕ್ಕೆ ಮಹಾಮಂಗಳಾರತಿ ಅನ್ನಸಂತರ್ಪಣೆ, ಸಂಜೆ ೭ಕ್ಕೆ ದೇವರ ನೃತ್ಯ, ಸಾಮೂಹಿಕ ವಸಂತ ಪೂಜೆ, ಮಹಾ ಮಂಗಳಾರತಿ, ಅನ್ನಸಂತರ್ಪಣೆ ಸೇವಾ ಕಾರ್ಯಗಳು ನಡೆಯಲಿವೆ.

ತಾ. ೮ ರಂದು ಬೆಳಿಗ್ಗೆ ೭ ಗಂಟೆಗೆ ಭಕ್ತಾದಿಗಳಿಂದ ಸೇವೆ, ತಲೆಮುಡಿ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ ಇತರ ದೇವರ ಸೇವೆಗಳನ್ನು ಸಲ್ಲಿಸಲು ಭಕ್ತಾದಿಗಳಿಗೆ ಅನುಕೂಲ ಕಲ್ಪಿಸಲಾಗಿದೆ. ಮಧ್ಯಾಹ್ನ ೧೨.೩೦ಕ್ಕೆ ಮಹಾಮಂಗಳಾರತಿ ಅನ್ನಸಂತರ್ಪಣೆ ಸಂಜೆ ೭ಕ್ಕೆ ದೇವಸ್ಥಾನದ ಕಲ್ಯಾಣಿಯಲ್ಲಿ ದೇವರ ಅವಬೃತ ಸ್ನಾನ, ನಂತರ ದೇಗುಲದಲ್ಲಿ ಸ್ವಾಮಿಯ ನೃತ್ಯ ಪ್ರದಕ್ಷಿಣೆ ಮತ್ತು ಮಹಾ ಮಂಗಳಾರತಿ, ಅನ್ನಸಂತರ್ಪಣೆ ನಡೆಯಲಿದೆ.

ಡಿ. ೯ ರಂದು ಹಬ್ಬದ ಪ್ರಯುಕ್ತ ಕಳಸ ಪೂಜೆ ಇರುವುದರಿಂದ ಮಧ್ಯಾಹ್ನ ತನಕ ಯಾವುದೇ ಸೇವೆಗಳು ಇರುವುದಿಲ್ಲ. ಜನವರಿ ೫ ರಂದು ಕಿರು ಷಷ್ಠಿ ನಡೆಯಲಿದೆ ಎಂದು ಮಾಹಿತಿ ನೀಡಿದರು. ಉಪಾಧ್ಯಕ್ಷರಾದ ಕೊಪ್ಪಿರ ಸನ್ನಿ ಸೋಮಯ್ಯ, ಕಾರ್ಯದರ್ಶಿ ಪೊನ್ನಿಮಾಡ ಬೋಜಪ್ಪ, ಸಹ ಕಾರ್ಯದರ್ಶಿ ಕುಲ್ಲಚಂಡ ಪ್ರಮೋದ್ ಗಣಪತಿ, ಖಜಾಂಚಿ ಜಪ್ಪೆಕೋಡಿ ರಾಜ ಉತ್ತಪ್ಪ, ಸಹ ಖಜಾಂಚಿ ಪಿ.ವಿ ಶೋಭಿತ್, ನಿರ್ದೇಶಕ ವಿ.ಟಿ ವಾಸು ಇದ್ದರು.