ಮಡಿಕೇರಿ, ನ. ೨೯: ಮೈಸೂರು ಭವಿಷ್ಯ ನಿಧಿ ಪ್ರಾದೇಶಿಕ ಕೇಂದ್ರದಿAದ ‘ನಿಧಿ ಆಪ್ಕೆ ನಿಕಟ್' (ಭವಿಷ್ಯ ನಿಧಿ ನಿಮ್ಮ ಹತ್ತಿರ) ೨.೦ ರ ಅಡಿಯಲ್ಲಿ ಭವಿಷ್ಯ ನಿಧಿಯ ಬಗ್ಗೆ ಜಿಲ್ಲಾ ವ್ಯಾಪ್ತಿಯ ಮಾಹಿತಿ ಕಾರ್ಯಕ್ರಮ ಮಡಿಕೇರಿಯ ಸಂತ ಮೈಕಲರ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಂತ ಮೈಕಲರ ಕಾಲೇಜಿನ ಪ್ರಾಂಶುಪಾಲ ಸುಮಂತ್ ಕೆ.ಎಸ್. ಶಾಲಾ ಮುಖ್ಯೋಪಾಧ್ಯಾಯ ಜಾನ್ಸನ್ ಕೆ. ಅವರು ಹಾಜರಿದ್ದರು.
ಮೈಸೂರಿನ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿಯ ಇ.ಪಿ.ಎಫ್.ಒ ಬಿ.ಎನ್ ರಮೇಶ್, ಎಸ್.ಎಸ್.ಎ ಪಿ.ಎಂ ಸ್ವಸ್ತಿಕ್, ಎ.ಎಸ್.ಎಸ್.ಎ ತೇಜಸ್ ಕೃಷ್ಣನ್, ಮಡಿಕೇರಿ ಇ.ಎಸ್.ಐ.ಸಿ ಶಾಖಾ ವ್ಯವಸ್ಥಾಪಕ ರವಿನಂದನ್. ಹೆಚ್.ಎಸ್ ಹಾಜರಿದ್ದರು. ಪಿಂಚಣಿದಾರರ ಕುಂದುಕೊರತೆಗಳನ್ನು ಆಲಿಸಿದರು.
ಉದ್ಯೋಗದಾತರು, ಉದ್ಯೋಗಿಗಳು ಮತ್ತು ಪಿಂಚಣಿದಾರರು ಕುಂದುಕೊರತೆಗಳ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಮಾಹಿತಿ ಪಡೆದುಕೊಂಡರು. ಪಿಂಚಣಿದಾರರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲಾಯಿತು.