ಮಡಿಕೇರಿ, ಫೆ. ೨: ಮೇಕೇರಿ ಎಂ.ಕೆ. ಕ್ರಿಕೆರ್ಸ್ ವತಿಯಿಂದ ಮೇಕೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಮೂರುದಿನಗಳ ಕಾಲ ನಡೆದ ಮೇಕೇರಿ ಪ್ರೀಮಿಯರ್ ಲೀಗ್ ಸೀಸನ್-೫ರ ಚಾಂಪಿಯನ್ ಆಗಿ ಚರಣ್ ಮಾಲೀಕತ್ವದ ಟೀಂ ರೋಲೆಕ್ಸ್ ಹೊರಹೊಮ್ಮಿದೆ.
ಪ್ರದೀಪ್ ಮಾಲೀಕತ್ವದ ಸುತಿರ್ತ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದು, ವಿನಯ್ ಮಾಲೀಕತ್ವದ ಸಂತೃಪ್ತಿ ಕಾಫಿ ಲಿಂಕ್ಸ್ ತಂಡ ತೃತೀಯ ಹಾಗೂ ಅನಿಸ್ ಮಾಲೀಕತ್ವದ ಅಪ್ಪು ಕ್ರಿಕೆರ್ಸ್ ತಂಡ ನಾಲ್ಕನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.
ಪ್ರಥಮ ವಿಜೇತ ತಂಡಕ್ಕೆ ರೂ.೧ ಲಕ್ಷ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ.೫೦ ಸಾವಿರ ಹಾಗೂ ತೃತೀಯ ಸ್ಥಾನ ಪಡೆದ ತಂಡಕ್ಕೆ ರೂ.೧೦ ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ, ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ ಆಕರ್ಷಕ ಟ್ರೋಫಿ ನೀಡಲಾಯಿತು. ಅಲ್ಲದೇ ಹಲವು ವೈಯಕ್ತಿಕ ಬಹುಮಾನವನ್ನು ನೀಡಲಾಯಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಪಾಲ್ಗೊಂಡು ಬ್ಯಾಟಿಂಗ್ ಮಾಡುವ ಮೂಲಕ ಫೈನಲ್ ಪಂದ್ಯಾವಳಿಯನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಶಾಸಕರು, ಕ್ರೀಡೆ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಅಲ್ಲದೇ ಸಮುದಾಯಗಳ ನಡುವೆ ಒಗ್ಗಟ್ಟನ್ನು ಮೂಡಿಸಲು ಸಹಕಾರಿಯಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಸದಸ್ಯ ಹಾಗೂ ಕಾಫಿ ಬೆಳೆಗಾರ ಭೀಷ್ಮ ದಂಬೆಕೋಡಿ, ಕಿಂಬರ್ಲಿ ಕೂರ್ಗ್ ಕೆಫೆ ಕೂರ್ಗ್ ಗಾವಧನ ರೆಸಾರ್ಟ್ ಮಾಲೀಕ ಕೆ.ಎಂ. ಗಣೇಶ್, ಮೇಕೇರಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಸಿ.ಬಿ. ಮಮತ, ಮೇಕೇರಿ ಗ್ರಾ.ಪಂ. ಸದಸ್ಯ ಎಂ.ಯು. ಹನೀಫ್, ಮೇಕೇರಿ ದಲಿತ ಸಂಘರ್ಷ ಸಮಿತಿ ಸದಸ್ಯ ಹೆಚ್.ಸಿ. ಪೊನ್ನಪ್ಪ, ಕಾಫಿ ಬೆಳೆಗಾರರಾದ ಚೆಟ್ಟೋಳಿರ ಪ್ರಕಾಶ್, ಮಂದ್ರಿರ ನಾಗೇಶ್, ಗುತ್ತಿಗೆದಾರ ಜಿ.ಸಿ. ವಸಂತ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಕೂರ್ಗ್ ಟೈಗರ್ ಟ್ರಾನ್ಸ್ಪೋರ್ಟ್ನ ಶುಭಾಷ್, ಅರವತ್ತೊಕ್ಲು ಪೆರತ ಫ್ರೆಂಡ್ಸ್ ಯೂತ್ ಕ್ಲಬ್ ಅಧ್ಯಕ್ಷ ಬಾಲಾಡಿ ಪ್ರತಾಪ್ ಕುಮಾರ್, ಉದ್ಯಮಿ ರಾಜೇಶ್ ಆಚಾರ್ಯ, ಕೊಡಗು ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಜಾನ್ಸನ್ ಪಿಂಟೋ, ಕಾಂಗ್ರೆಸ್ ಪಕ್ಷದ ಮೇಕೇರಿ ವಲಯ ಕಾರ್ಯದರ್ಶಿ ಎಂ.ಯು.ರಫೀಕ್, ಉದ್ಯಮಿ ಗಾಯತ್ರಿ ಪ್ರಭಾಕರ್, ಕುಂದೂರುಮೊಟ್ಟೆ ದಸರಾ ಸೇವಾ ಸಮಿತಿ ಸದಸ್ಯ ಶೇಯಸ್ ಮತ್ತಿತರರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರಾದ ಮಮತ, ಭವಾನಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.