ಚೆಟ್ಟಳ್ಳಿ, ಮಾ. ೨೧: ಕೊಡವ ಆಚಾರ ವಿಚಾರ, ಸಂಸ್ಕೃತಿ ಆಚಾರ ವಿಚಾರವನ್ನು ಬಿಂಬಿಸುವ ಆಚರಣೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗು ಸುಂಟಿಕೊಪ್ಪ ಕೊಡವ ಸಮಾಜ ಅಯೋಜನೆಯಲ್ಲಿ ಸುಂಟಿಕೊಪ್ಪದಲ್ಲಿ ಕೊಡವ ನಮ್ಮೆ ನಡೆಯಿತು.

ಸುಂಟಿಕೊಪ್ಪ ಅಯ್ಯಪ್ಪ ದೇವಾಲಯದಿಂದ ಮುಖ್ಯ ಪಟ್ಟಣದ ಮೂಲಕ ಕೊಡವ ಸಮಾಜದವರೆಗೆ ಕೊಡವ ಸಾಂಪ್ರದಾಯಿಕ ದುಡಿಕೊಟ್ಟ್, ಕೊಂಬ್‌ಕೊಟ್ಟ್ ವಾಲಗದೊಂದಿಗೆ ಕೊಡವ ಸಾಂಸ್ಕೃತಿಕ ಮೆರವಣಿಗೆ ನಡೆಯಿತು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕೊಡವ ಜನಾಂಗದ ಮೂಲ ಸಾಂಪ್ರದಾಯಿಕ ಆಚಾರ ವಿಚಾರ ಸಂಸ್ಕೃತಿ, ಭಾಷೆ, ಉಡುಪು ತೊಡುಪನ್ನು ಉಳಿಸಿಕೊಂಡಾಗ ಮಾತ್ರ ಕೊಡವ ಜನಾಂಗ ಉಳಿಯಲು ಸಾಧ್ಯ. ಹಿರಿಯರು ಕಟ್ಟಿಕೊಟ್ಟ ಐನ್ ಮನೆ, ಕೈಮಡ, ಅರೋಡ, ಮಂದ್‌ಮಾನಿ ಕೊಡವರ ಮೂಲನೆಲೆಯಾಗಿಯೇ ಉಳಿಯಬೇಕೆಂದರು.

ಕೊಡವರ ಒಗ್ಗಟ್ಟಿನ ಪ್ರದರ್ಶನದ ಮೂಲಕ ಸಂಸ್ಕೃತಿಯ ಪ್ರದರ್ಶನದ ವೇದಿಕೆಯೇ ಈ ಕೊಡವ ನಮ್ಮೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವಿವಿಧೆಡೆ ಹಲವು ಕಾರ್ಯಕ್ರಮವನ್ನು ನಡೆಸಿಕೊಂಡು ಬರುತಿದೆ. ಪ್ರತಿ ಕೊಡವ ಸಮಾಜಗಳು ಕೊಡವ ಭಾಷೆ, ಸಂಸ್ಕೃತಿ, ಆಚಾರ ವಿಚಾರದ ಉಳಿಸಿ ಬೆಳೆಸುವ ವೇದಿಕೆಯಾಗಲಿದೆ ಎಂದರು.

ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಮಾತನಾಡಿ ಕೊಡವ ಸಂಸ್ಕೃತಿ ಆಚಾರ ವಿಚಾರವನ್ನು ಉಳಿಸಿ ಬೆಳೆಸುವ ಜೊತೆಗೆ ಮುಂದಿನ ಯುವ ಪೀಳಿಗೆಗೆ ಮಾರ್ಗದರ್ಶನವನ್ನು ನೀಡುವಂತಾಗ ಬೇಕೆಂದರು. ಕೊಡವ ಸಾಹಿತ್ಯ ಅಕಾಡೆಮಿಯ ಕಾರ್ಯವನ್ನು ಶ್ಲಾಘಿಸಿದರು. ಹಾಕಿ ಆಟಗಾರ ಹಾಗೂ ಕ್ರೀಡಾ ವೀಕ್ಷಕ ವಿವರಣೆಗಾರ ಚೆಪ್ಪುಡಿರ ಎ.ಕಾರ್ಯಪ್ಪ ಮಾತನಾಡಿ ಹಿರಿಯ ಹಾಕಿ ಆಟಗಾರ ಪದ್ಮಶ್ರೀ ಪ್ರಶಸ್ತಿ ವಿಜೇತ ಮೊಳ್ಳರ ಪಿ.ಗಣೇಶ್ ಅವರನ್ನು ದೇಶಕ್ಕಾಗಿ ನೀಡಿದ ಕೀರ್ತಿ ಸುಂಟಿಕೊಪ್ಪದ ಅಂದ ಗೋವೆಗೆ ಸಲ್ಲಬೇಕೆಂದರು. ಇವರು ಈಗಿನ ಯುವ ಪೀಳಿಗೆಗೆ ಮಾದರಿಯಾಗಲಿದ್ದಾರೆಂದರು. ಕಾಫಿಮಂಡಳಿಯ ಮಾಜಿ ಉಪಾಧ್ಯಕ್ಷ ನಡಿಕೇರಿಯಂಡ ಬೋಸ್ ಮಂದಣ್ಣ ಮಾತನಾಡಿ ಯುವಪೀಳಿಗೆಯವರು ಉಳಿತಾಯದ ಮನೋಭಾವನೆಯನ್ನು ಬೆಳೆಸಬೇಕೆಂದರು. ಸಾಂಪ್ರದಾಯಿಕವಾಗಿ ಬಂದAತ ಈ ಪುಣ್ಯ ಭೂಮಿಯನ್ನು ಮಾರಾಟ ಮಾಡಬಾರದೆಂದರು. ಕಾರ್ಯಕ್ರಮದ ಅಂಗವಾಗಿ ಸುಂಟಿಕೊಪ್ಪ ಕೊಡವ ಸಮಾಜ ಮಹಿಳೆಯರಿಂದ ಸ್ವಾಗತ ನೃತ್ಯ ನೆರವೇರಿತು.

ಸನ್ಮಾನ: ಹಿರಿಯ ಕೊಡವಾಭಿಮಾನಿ ಪುಡಿಯಂಡ ಕೆ.ಮುತ್ತಣ್ಣ, ಹಿರಿಯ ಜಾನಪದ ಕಲಾವಿದ ಚಿಕ್ಕಂಡ ಉತ್ತಪ್ಪ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಮುಕ್ಕಾಟೀರ ಎ.ವಸಂತ, ಹಿರಿಯ ಕೊಡವಾಭಿಮಾನಿ ಚೇನಂಡ ಎ.ಉತ್ತಯ್ಯ ,ಹಿರಿಯ ಹಾಕಿ ಆಟಗಾರ ಮಾಳೆಯಂಡ ಡಿ.ಮುತ್ತಪ್ಪ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ರಿಜಿಸ್ಟಾçರ್ ಅಜ್ಜಿಕುಟ್ಟೀರ ಸಿ.ಗಿರೀಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕೊಡವ ಬಾಳ್- ಬದ್‌ಕ್, ಅಂದ್ - ಇಂದ್ ಎಂಬ ಬಗ್ಗೆ ಅಪ್ಪಚಟ್ಟೋಳಂಡ ಸೋಮಯ್ಯ ಹಾಗೂ ಕೊಡವಾಮೆನ ಪೋತುವಲ್ಲಿ ಪೊಮ್ಮಕ್ಕಡ ಜವಾಬ್ದಾರಿ ಎಂಬ ಬಗ್ಗೆ ಅಜ್ಜಿಕುಟ್ಟೀರ ಸುನಿತ ಗಿರೀಶ್ ವಿಚಾರ ಮಂಡಿಸಿದರು.

ಕೊಡವ ಕವಿಗೋಷ್ಠಿಯಲ್ಲಿ ಉಡುವೆರ ವಿಠಲ್ ತಿಮ್ಮಯ್ಯ, ಅಣ್ಣಳಮಡ ಕಾಂತಿ ಚೋಂದಮ್ಮ, ಉಡುವೆರ ರೇಖ ರಘು, ಚೆಪ್ಪುಡಿರ ಸತೀಶ್ , ಅಂಜಪರವAಡ ರಂಜನ್ ಮುತ್ತಪ್ಪ ಕವನ ವಾಚಿಸಿದರು. ಕಾರ್ಯಕ್ರಮದ ಅಂಗವಾಗಿ ಬೆಕ್ಕೆಸೊಡ್ಲೂರ್ ಮಂದತವ್ವ ಕೊಡವ ಸಾಂಸ್ಕೃತಿಕ ತಂಡದಿAದ ವಿವಿಧ ನೃತ್ಯ, ಉಮ್ಮತಾಟ್, ಮುಕ್ಕೋಡ್ಲು ವ್ಯಾಲಿಡ್ಯೂ ತಂಡದಿAದ ಪೀಲಿಯಾಟ್ ಬೊಳಕಾಟ್, ಕೊಡಗರಳ್ಳಿ ತಂಡದಿAದ ಬಾಳೋಪಾಟ್, ವಾಲಗತಾಟ್ ಪ್ರದರ್ಶನ ನೆರವೇರಿತು. ನಂತರ ವಿವಿಧ ಸಾಂಸ್ಕೃತಿಕ ಸ್ಪರ್ಧೆ ಏರ್ಪಡಿಸಲಾಗಿತ್ತು. ಮುಕ್ಕಾಟಿರ ಪಾರ್ವತಿ ವಸಂತ ಪಾರ್ಥಿಸಿ, ಅಜ್ಜಿಕುಟ್ಟೀರ ಗಿರೀಶ್, ಅಜ್ಜಿಕುಟ್ಟೀರ ಸುನಿತ ಗಿರೀಶ್, ಮುಕ್ಕಾಟಿರ ವಸಂತ ನಿರೂಪಿಸಿದರು. ಅಜ್ಜಿಕುಟ್ಟೀರ ಗಿರೀಶ್ ವಂದಿಸಿದರು.

ಸಂತಾಪ: ಸುಮಾರು ೫೫ ವರ್ಷಗಳ ಸುದೀರ್ಘ ಕನ್ನಡ ಚಲನ ಚಿತ್ರರಂಗದಲ್ಲಿ ಸೇವೆ, ಬರಹಗಾರನಾಗಿ, ಸಹನಿರ್ದೇಶಕನಾಗಿ, ನಿರ್ದೇಶಕನಾಗಿ, ನಿರ್ಮಾಪಕ ಹಾಗೂ ನಟನಾಗಿದ್ದ ಅಪಾಡಂಡ ಟಿ. ರಘು ಮೃತಪಟ್ಟ ಹಿನ್ನೆಲೆ ಸಂತಾಪ ಸೂಚಿಸಿದಲ್ಲದೆ ಕಾರ್ಯಕ್ರಮದಲ್ಲಿ ಅವರ ಆತ್ಮಕ್ಕೆ ಶಾಂತಿಕೋರಲಾಯಿತು. -ವರದಿ: ಪುತ್ತರಿರ ಕರುಣ್ ಕಾಳಯ್ಯ