ಗೋಣಿಕೊಪ್ಪಲು, ಮಾ.೨೧: ೧೩ ವರ್ಷಗಳ ಬಳಿಕ ಗೋಣಿಕೊಪ್ಪಲುವಿನ ಕಾವೇರಿ ಕಾಲೇಜು ಮೈದಾನದಲ್ಲಿ ಪ್ರತಿಷ್ಠಿತ ನೆಸ್ಕೆಫೆ ಕೊಡಗು ಹಾಕಿ ಕಪ್ಗೆ ವಿಧ್ಯುಕ್ತ ಚಾಲನೆ ನೀಡಲಾಯಿತು. ಬಿಸಿಲಿನ ಝಳದ ನಡುವೆ ಹಾಕಿ ಪಟುಗಳು ಮೈದಾನಕ್ಕಿಳಿದು ಉತ್ತಮ ಪ್ರದರ್ಶನ ನೀಡಿದರು. ದೇಶದ ಪ್ರಮುಖ ಕಂಪೆನಿಗಳಲ್ಲೊAದಾದ ಪ್ರತಿಷ್ಠಿತ ನೆಸ್ಕೆಫೆ ಸಂಸ್ಥೆಯು ಹಾಕಿ ಕಪ್ನ ಪ್ರಾಯೋಜಕತ್ವವನ್ನು ವಹಿಸಿದ್ದು, ಹಾಕಿ ಕೂರ್ಗ್ ಸಂಸ್ಥೆಯು ಇದರ ಜವಾಬ್ದಾರಿ ನಿಭಾಯಿಸುತ್ತಿದೆ.
ಈ ಹಿಂದೆ ಇದ್ದಂತಹ ನೆಸ್ಲೆ ಕಪ್ ಇದೀಗ ನೆಸ್ಕೆಫೆ ಕಪ್ ಆಗಿ ಬದಲಾವಣೆಯ ೩ಆರನೇ ಪುಟಕ್ಕೆ
(ಮೊದಲ ಪುಟದಿಂದ) ಹೆಸರನ್ನು ಪಡೆದಿದ್ದು, ಹಾಕಿ ಕೂರ್ಗ್ ಸಂಸ್ಥೆಯು ಈ ಪಂದ್ಯಾವಳಿಯನ್ನು ಪುನರಾರಂಭಿಸಲು ಮಾಡಿದ ಪ್ರಯತ್ನದಲ್ಲ್ಲಿ ಯಶಸ್ವಿಯಾಗಿದೆ. ಈ ಬಾರಿ ಲೀಗ್ನಲ್ಲಿ ಟಾಪ್ ೮ ಸ್ಥಾನ ಪಡೆದ ತಂಡಗಳಾದ ಎಂ.ಆರ್.ಎಫ್. ಮೂರ್ನಾಡ್, ಬ್ಲೇಜ್ ಮೂರ್ನಾಡ್, ಮಹದೇವ ಸ್ಪೊರ್ಟ್ಸ್ ಕ್ಲಬ್ ಬಲಂಬೇರಿ, ಕೋಣನಕಟ್ಟೆ ಇಲವೆನ್, ಯುಎಸ್ಸಿ ಬೇರಳಿನಾಡ್, ಈವೈಸಿ ಬೇಗೂರ್, ಮಲ್ಮ ಕಕ್ಕಬ್ಬೆ, ಬೊಟ್ಟö್ಯತ್ನಾಡ್ ಕುಂದ ತಂಡಗಳು ನೆಸ್ಕೆಫೆ ಕೊಡಗು ಕಪ್ನಲ್ಲಿ ಸೆಣೆಸಾಟ ಆರಂಭಿಸಿವೆ.
ಮುAಜಾನೆ ಮೈದಾನಕ್ಕಿಳಿದ ತಂಡಗಳು ತೀವ್ರ ಪೈಪೋಟಿ ನಡೆಸಿ ಹಾಕಿ ಪ್ರಿಯರನ್ನು ಸಂತೋಷಗೊಳಿಸಿತು. ೮ ತಂಡಗಳಲ್ಲಿಯೂ ತಲಾ ೬ ಅತಿಥಿ ಆಟಗಾರರನ್ನು ಕರೆಸಿಕೊಳ್ಳಲು ಅವಕಾಶವಿರುವುದನ್ನು ಈ ತಂಡಗಳು ಸದ್ಬಳಕೆ ಮಾಡಿಕೊಳ್ಳುವ ಮೂಲಕ ರಾಜ್ಯ ಹಾಗೂ ರಾಷ್ಟçಮಟ್ಟದಲ್ಲಿ ಹೆಸರು ಮಾಡಿದ ಆಟಗಾರರು ಮೈದಾನಕ್ಕಿಳಿದು ಉತ್ತಮ ಪ್ರದರ್ಶನ ನೀಡುವ ಮೂಲಕ ಕ್ರೀಡಾಭಿಮಾನಿಗಳ ಚಪ್ಪಾಳೆಗಿಟ್ಟಿಸುವಲ್ಲಿ ಯಶಸ್ವಿಯಾದರು.
ಉದ್ಘಾಟನೆ
ಹಾಕಿ ಕೂರ್ಗ್ನ ಅಧ್ಯಕ್ಷ ಪಳಂಗAಡ ಲವಕುಮಾರ್ ಅಧ್ಯಕ್ಷತೆಯಲ್ಲಿ ಜರುಗಿದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಮೇಜರ್ ಪಳಂಗAಡ ಕುನಾಲ್ ಕುಟ್ಟಪ್ಪ ಮಾತನಾಡಿ, ಕೊಡಗಿನಲ್ಲಿ ಹಾಕಿ ಕ್ರೀಡೆಗೆ ವಿಶೇಷವಾದ ಸ್ಥಾನಮಾನವಿದೆ. ಇದರ ಗೌರವ ಮತ್ತಷ್ಟು ಹೆಚ್ಚಾಗಲು ಹಾಕಿ ಕೂರ್ಗ್ ಸಂಸ್ಥೆಯು ವಾರ್ಷಿಕವಾಗಿ ಹಲವು ಪಂದ್ಯಾವಳಿಗಳನ್ನು ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಸುವ ಮೂಲಕ ಹಾಕಿ ಕ್ರೀಡೆಯಲ್ಲಿ ತೊಡಸಿಕೊಂಡಿರುವ ಯುವಕರಿಗೆ ಉತ್ತೇಜನ ಲಭಿಸುತ್ತಿದೆ. ಪ್ರತಿ ವರ್ಷವೂ ಹಾಕಿ ಪಂದ್ಯಾವಳಿಗಳು ಹೆಚ್ಚು ಹೆಚ್ಚಾಗಿ ನಡೆಯುವಂತಾಗಲಿ, ರಾಷ್ಟçಕ್ಕೆ ಉತ್ತಮ ಕ್ರೀಡಾಪಟುಗಳನ್ನು ಒದಗಿಸುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಹಾಕಿ ಕೂರ್ಗ್ನ ಅಧ್ಯಕ್ಷ ಪಳಂಗAಡ ಲವಕುಮಾರ್ ಮಾತನಾಡಿ, ಹಾಕಿ ಕೂರ್ಗ್ ಅಸ್ತಿತ್ವಕ್ಕೆ ಬಂದ ನಂತರ ಆಡಳಿತ ಮಂಡಳಿಯು ನೆಸ್ಕೆಫೆ ಕಂಪನಿಯನ್ನು ಭೇಟಿ ಮಾಡುವ ಮೂಲಕ ಹಾಕಿ ಕ್ರೀಡೆಗೆ ಉತ್ತೇಜನ ನೀಡಲು ಮನವಿ ಮಾಡಲಾಗಿತ್ತು. ಈ ಮನವಿಯಂತೆ ಪ್ರಸ್ತುತ ಸಾಲಿನ ಕೊಡಗು ಕಪ್ಗೆ ೧೫ ಲಕ್ಷ ಅನುದಾನವನ್ನು ನೆಸ್ಕೆಫೆ ನೀಡಿದೆ. ಲಭ್ಯವಿರುವ ಹಣದಲ್ಲಿ ಸುಸಜ್ಜಿತ ಮೈದಾನ, ಪ್ರೇಕ್ಷಕರಿಗೆ ಕುಳಿತುಕೊಳ್ಳಲು ಶಾಮಿಯಾನದ ವ್ಯವಸ್ಥೆ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒದಗಿಸಲಾಗಿದೆ. ಹಾಕಿ ಕ್ರೀಡೆಯನ್ನು ಮತ್ತಷ್ಟು ಪ್ರೋತ್ಸಾಹಿಸಲು ಹಾಕಿ ಕೂರ್ಗ್ ಸಂಸ್ಥೆ ಶ್ರಮಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗೋಣಿಕೊಪ್ಪ ಕಾವೇರಿ ಕಾಲೇಜು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆ.ಪಿ. ಬೋಪಣ್ಣ , ಹಾಕಿ ಕೂರ್ಗ್ನ ಉಪಾಧ್ಯಕ್ಷೆ ಮಾಪಂಗಡ ಯಮುನಾ ಚಂಗಪ್ಪ, ಕಾರ್ಯದರ್ಶಿ ಅಮ್ಮಂಡಿರ ಚೇತನ್, ಖಜಾಂಚಿ ಗುಮ್ಮಟ್ಟಿರ ಮುತ್ತಣ್ಣ, ಕಾಫಿ ಬೆಳೆಗಾರ ಕರ್ತಮಾಡ ಪವನ್ ಸುಬ್ಬಯ್ಯ, ನೆಲ್ಲಮಕ್ಕಡ ಮೋಹನ್, ಕುಳುವಂಡ ಸುಬ್ಬಯ್ಯ, ಚೆಪ್ಪುಡಿರ ಶುಭಾಶ್ ಮುತ್ತಣ್ಣ, ನೆಸ್ಲೆ ಇಂಡಿಯಾದ ಅಮಿತ್, ಕೌಶಿಕ್ ಸೇರಿದಂತೆ ಗಣ್ಯರು ಭಾಗವಹಿಸಿದ್ದರು.
ಕಾವೇರಿ ಕಾಲೇಜಿನ ವಿದ್ಯಾರ್ಥಿ ಸಿ.ವಿ. ಅನ್ವಿತ್ಕುಮಾರ್ ಪ್ರಾರ್ಥಿಸಿ, ಹಾಕಿ ಕೂರ್ಗ್ನ ಖಜಾಂಚಿ ಗುಮ್ಮಟ್ಟಿರ ಮುತ್ತಣ್ಣ ಸ್ವಾಗತಿಸಿ, ಮೂಕಚಂಡ ಬೊಳ್ಳಮ್ಮ ಪೂಣಚ್ಚ ನಿರೂಪಿಸಿ, ವಂದಿಸಿದರು. ಕಾವೇರಿ ಕಾಲೇಜಿನ ದೈಹಿಕ ನಿರ್ದೇಶಕರುಗಳಾದ ಮಲ್ಲಮಾಡ ಸಂತೋಷ್, ಮಿನ್ನಂಡ ಜೋಯಪ್ಪ, ತಾಂತ್ರಿಕ ಉಸ್ತುವಾರಿ ಬುಟ್ಟಿಯಂಡ ಚಂಗಪ್ಪ ಸೇರಿದಂತೆ ಇನ್ನಿತರ ಗಣ್ಯರು ಪಾಲ್ಗೊಂಡಿದ್ದರು. -ಹೆಚ್.ಕೆ.ಜಗದೀಶ್