ಮಡಿಕೇರಿ, ಏ.೭: ನಗರದ ಕನ್ನಿಕಾ ಬಡಾವಣೆ ಯಲ್ಲಿರುವ ಲಿಟ್ಲ್ ಪ್ಲವರ್ ವಿದ್ಯಾಸಂಸ್ಥೆಯಲ್ಲಿ ಚಿಣ್ಣರ ಮೇಳ/ ಬೇಸಿಗೆ ಶಿಬಿರಕ್ಕೆ ಗುರುವಾರ ಚಾಲನೆ ದೊರೆಯಿತು. ಲಿಟ್ಲ್ ಪ್ಲವರ್ ಸಂಸ್ಥೆಯಲ್ಲಿ ಮಕ್ಕಳ ಕ್ರೀಯಾಶೀಲತೆ ಮತ್ತು ಸೃಜನಶೀಲತೆಗೆ ಒತ್ತು ನೀಡಲಾಗುತ್ತಿದೆ ಎಂದು ಪ್ರಾಂಶುಪಾಲರಾದ ಸುನಿತಾ ಪ್ರೀತು ಅವರು ತಿಳಿಸಿದ್ದಾರೆ.
ಬೇಸಿಗೆ ಅವಧಿಯಲ್ಲಿ ಮಕ್ಕಳಿಗೆ ಒಂದರಿAದ ಎರಡು ತಿಂಗಳ ಕಾಲ ರಜೆ ಇದ್ದು, ಮಕ್ಕಳು ಓದಿನ ಜೊತೆಗೆ ಕ್ರೀಯಾಶೀಲತೆ ಮತ್ತು ಸೃಜನಶೀಲತೆಗೆ ಒತ್ತು ನೀಡುವಲ್ಲಿ ಲಿಟ್ಲ್ ಪ್ಲವರ್ ಸಂಸ್ಥೆ ಮುಂದಾಗಿದೆ ಎಂದು ತಿಳಿಸಿದರು. ಮಕ್ಕಳಿಗೆ ಚಿತ್ರಕಲೆಯ ಮೂಲಕ ಕಲಿಕಾ ಅಭಿವೃದ್ಧಿ ಹೆಚ್ಚಿಸು ವುದು ಅತೀ ಮುಖ್ಯವಾಗಿದೆ. ಜೊತೆಗೆ ಆಟದ ಮೂಲಕ ಪಾಠವನ್ನು ಕಲಿಯಲು ಸಲಹೆ, ಮಾರ್ಗ ದರ್ಶನ ಮಾಡಲಾಗುತ್ತದೆ ಎಂದು ವಿವರಿಸಿದರು.
ಲಿಟ್ಲ್ ಪ್ಲವರ್ ಸಂಸ್ಥೆಯಲ್ಲಿ ೭ನೇ ತರಗತಿವರೆಗೆ ನಿರಂತರ ಕಲಿಕೆಯ ಮಕ್ಕಳ ಪ್ರಗತಿಗೆ ಪ್ರೇರೇಪಣೆ ನೀಡಲಾಗುತ್ತಿದೆ ಎಂದು ಸುನಿತಾ ಪ್ರೀತು ಅವರು ತಿಳಿಸಿದರು. ನಿವೃತ್ತ ಪೌರಾಯುಕ್ತರಾದ ಬಿ.ಬಿ.ಪುಷ್ಪಾವತಿ ಅವರು ಮಾತನಾಡಿ ಮಕ್ಕಳ ಜೊತೆ ಬೆರೆಯುವುದು ಹೂವಿನ ಜೊತೆ ಆಟವಾಡಿ ದಂತಾಗುತ್ತದೆ. ಆದ್ದರಿಂದ ಮಕ್ಕಳ ಕ್ರೀಯಾಶೀಲತೆ ಮತ್ತು ಸಂವೇದನಾ ಶೀಲತೆ ಹೆಚ್ಚಿಸಲು ಲಿಟ್ಲ್ ಪ್ಲವರ್ ವಿದ್ಯಾಸಂಸ್ಥೆಯಲ್ಲಿ ಬೇಸಿಗೆ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಎಂದರು. ಸಂಸ್ಥೆಯ ವಿಶೇಷ ಶಿಕ್ಷಣ ಮಾರ್ಗದರ್ಶಕರಾದ ಮಾಳವಿಕ ಅವರು ಮಾತನಾಡಿ ಆಧುನಿಕ ಯುಗದಲ್ಲಿ ಮಾಹಿತಿ ಶಿಕ್ಷಣ ಅತ್ಯಗತ್ಯವಾಗಿ ಬೇಕಿದೆ. ಆ ನಿಟ್ಟಿನಲ್ಲಿ ಲಿಟ್ಲ್ ಪ್ಲವರ್ ವಿದ್ಯಾಸಂಸ್ಥೆಯಿAದ ಚಿಣ್ಣರ ಮೇಳ ಆಯೋಜಿಸ ಲಾಗಿದೆ ಎಂದರು.
ಶಿಕ್ಷಕಿ ಶ್ವೇತಾ ಅವರು ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಆಟ-ಪಾಠ ಬಗ್ಗೆ ಮಾಹಿತಿ ನೀಡಲಾಗು ತ್ತಿದೆ. ಮಕ್ಕಳ ಕಲಿಕೆ ನಿರಂತರವಾಗಿರ ಬೇಕು. ಜೊತೆಗೆ ಮಕ್ಕಳು ಕ್ರೀಡೆ, ಕಲೆ ಹಾಗೂ ಸಂಗೀತ ದಲ್ಲಿಯೂ ತೊಡಗಿಸಿಕೊಳ್ಳುವಂತಾಗಬೇಕು ಎಂದರು. ಲಿಟ್ಲ್ ಪ್ಲವರ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಜಾನಪದ ನೃತ್ಯ ಪ್ರದರ್ಶಿಸಲು, ಪ್ರಾಣಿ, ಪಕ್ಷಿಗಳ ಬಗ್ಗೆ ಮಾಹಿತಿ ನೀಡಿದರು. ಕುವೆಂಪು, ಪುರಂದರ ದಾಸರು, ಸ್ವಾಮಿ ವಿವೇಕಾನಂದ ಇತರ ಗಣ್ಯರ ವ್ಯಕ್ತಿ ಪರಿಚಯ ಕುರಿತು ಮಾತನಾಡಿದ್ದು ಗಮನ ಸೆಳೆಯಿತು.