ಕೂಡಿಗೆ, ಏ.೧೩: ಹೆಜ್ಜೇನು ದಾಳಿಯಂದ ರೈತ ಸಾವಿಗೀಡಾದ ಘಟನೆ ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ಲೂರು ಗ್ರಾಮದಲ್ಲಿ ನಡೆದಿದೆ.
ನಂಜುAಡ (೫೦) ಮೃತ ದುರ್ದೈವಿ. ತಮ್ಮ ಜಮೀನಿಗೆ ತೆರಳಿದ ಸಂದರ್ಭದಲ್ಲಿ ಮರದಲ್ಲಿದ್ದ ಹೆಜ್ಜೇನಿನ ಹುಳುಗಳು ದಾಳಿ ಮಾಡಿವೆ.
ಸಮೀಪದಲ್ಲಿದ್ದ ಮನೆಯ ಹತ್ತಿರ ಓಡಿ ಬಂದ ಸಂದರ್ಭದಲ್ಲಿ ಮನೆಯವರು ಸಮೀಪದ ಕೊಣನೂರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಂಜುAಡ ಸಾವನ್ನಪ್ಪಿದ್ದಾರೆ. ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.