ಮಡಿಕೇರಿ, ಏ. ೧೪: ಪೊಲೀಸ್ ಇಲಾಖೆಯ ಕೊಡಗು ಪೊಲೀಸ್ ಸಾಂಸ್ಕೃತಿಕ ವೇದಿಕೆಯ ಪ್ರತಿಭೋತ್ಸವ ಕಾರ್ಯಕ್ರಮದ ತಿಂಗಳಿಗೊAದು ಬಾರಿ ಯ ಕಲಾ ಸಂಚಿಕೆ -೨ ವೀರಾಜಪೇಟೆ ತಾಲೂಕಿನ ಬಿಟ್ಟಂಗಾಲದ ಹೆಗ್ಗಡೆ ಸಮಾಜದಲ್ಲಿ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮ ದ ಉದ್ಘಾಟನೆಯನ್ನು ಗೋಣಿಕೊಪ್ಪ ಕಾವೇರಿ ಕಾಲೇಜಿನ ಪ್ರಾಂಶುಪಾಲ ಹಾಗೂ ಕೊಡಗು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಎಂ.ಬಿ. ಕಾವೇರಪ್ಪನವರು ಹಾಗೂ ವೀರಾಜಪೇಟೆ ಸರ್ವೋದಯ ಮಹಾವಿದ್ಯಾಲಯದ ಪ್ರಾಂಶುಪಾಲೆ ಹಾಗೂ ಸಿಂಡಿಕೇಟ್ ಸದಸ್ಯರಾದ ಡಾ.ಎಂ. ವಾಣಿ ರವರು ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾವೇರಪ್ಪ ಅವರು ಮಾತನಾಡಿ ಒತ್ತಡ ಕರ್ತವ್ಯದಿಂದ ಹೊರ ಬಂದು ತಮ್ಮ ಪ್ರತಿಭೆ ಗಳನ್ನು ಹೊರ ತರಲು ಇದೊಂದು ಉತ್ತಮ ವೇದಿಕೆಯಾಗಿದೆ. ಪೊಲೀಸರ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಧಿಕಾರಿಗಳ ಬೆಂಬಲವನ್ನು ಶ್ಲಾಘಿಸಿದರು.
ಮತ್ತೊರ್ವ ಅತಿಥಿ ಡಾ. ವಾಣಿ ಮಾತನಾಡಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಕಾರ್ಯಕ್ರಮಗಳು ನಡೆಯಲಿ ಎಂದು ಹಾರೈಸಿದರು . ನಂತರ ನಡೆದ ಸಂಗೀತ ಸಂಜೆಯಲ್ಲಿ ಮಡಿಕೇರಿ ಗ್ರಾಮಾಂತರ ನಿರೀಕ್ಷಕ ಚಂದ್ರಶೇಖರ, ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಕುಶಾಲನಗರ ಠಾಣಾಧಿಕಾರಿ ಗೀತಾ ಸೇರಿದಂತೆ ಜಿಲ್ಲೆಯ ವಿವಿಧ ಠಾಣೆಗಳ ೪೩ ಅಧಿಕಾರಿ ಮತ್ತು ಸಿಬ್ಬಂದಿಗಳು ೧೯೮೦ರ ದಶಕದ ಚಿತ್ರ ಗೀತೆಗಳನ್ನು ಕರೋಕೆ ಮೂಲಕ ಹಾಡಿ ತಮ್ಮ ಪ್ರತಿಭೆಗಳನ್ನು ಹೊರ ಹಾಕಿದರು. ಜೊತೆಗೆ ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ತೊಟ್ಟ ಅಧಿಕಾರಿ ಸಿಬ್ಬಂದಿಗಳು ವೇದಿಕೆಯಲ್ಲಿ ಮಿಂಚಿದರು, ಸಿನಿಮಾ ಹಾಡುಗಳ ಜೊತೆಯಲ್ಲಿ ಕಂಟ್ರೋಲ್ ರೂಮಿನ ವಿಜಯ್, ಡಿ ಎ ಆರ್ ನ ತೀರ್ಥನಂದ ಅವರ ಕವನವಾಚನ, ಮಡಿಕೇರಿ ಗ್ರಾಮಾಂತರ ಠಾಣೆಯ ಬಸವರಾಜು ಅವರ ಏಕ ಪಾತ್ರ ಅಭಿನಯ ವೂ ಕಾರ್ಯಕ್ರಮಕ್ಕೆ ಕಳೆ ತಂದಿತು.
ಕಾರ್ಯಕ್ರಮದಲ್ಲಿ ಮಡಿಕೇರಿ ಉಪ ವಿಭಾಗದ ಡಿವೈಎಸ್ಪಿ ಪಿ.ಎ. ಸೂರಜ್, ವೀರಾಜಪೇಟೆ ಉಪ ವಿಭಾಗದ ಡಿವೈಎಸ್ಪಿ ಮಹೇಶ್ ಕುಮಾರ್, ಜಿಲ್ಲಾ ಗುಪ್ತ ದಳದ ನಿರೀಕ್ಷಕ ಮೇದಪ್ಪ ಐಪಿ, ವೀರಾಜಪೇಟೆ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಮಡಿಕೇರಿ ಗ್ರಾಮಾಂತರ ನಿರೀಕ್ಷಕ ಚಂದ್ರಶೇಖರ, ಕುಟ್ಟ ವೃತ್ತ ನಿರೀಕ್ಷಕ ಶಿವ ರುದ್ರ, ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮಿನ ನಿರೀಕ್ಷಕ ಅನಂತ್, ಬೆರಳಚ್ಚು ವಿಭಾಗದ ನಿರೀಕ್ಷಕ ರಾಮಕೃಷ್ಣ ಉಪನಿರೀಕ್ಷಕರಾದ ಧನಂಜಯ, ಪ್ರಮೋದ್, ಮಂಜುನಾಥ್, ನವೀನ್, ಲತಾ, ವಾಣಿಶ್ರೀ, ಗೀತಾ ಸೇರಿದಂತೆ ಹಲವು ಅಧಿಕಾರಿ ಹಾಗೂ ಸಿಬ್ಬಂದಿಗಳು ತಮ್ಮ ಕುಟುಂಬದೊAದಿಗೆ ಪಾಲ್ಗೊಂಡಿದ್ದರು.
ವೀರಾಜಪೇಟೆ ಡಿವೈಎಸ್ಪಿ ಮಹೇಶ್ ಕುಮಾರ್ ವೇದಿಕೆ ನಡೆದು ಬಂದ ದಾರಿಯ ಬಗ್ಗೆ ಮಾತನಾಡಿ ಹಾಡುಗಾರರಿಗೆ ನೆನಪಿನ ಕಾಣಿಕೆ ವಿತರಿಸಿದರು. ಮಡಿಕೇರಿ ಟ್ರಾಫಿಕ್ ಠಾಣೆಯ ಎಎಸ್ಐ ನಂದರವರನ್ನು ಸನ್ಮಾನಿಸಿದರು. ನಾಪೋಕ್ಲು ಠಾಣೆಯ ಪಿಎಸ್ಐ ಮಂಜುನಾಥ್ ಸ್ವಾಗತಿಸಿ, ವೈರ್ ಲೆಸ್ ಪಿ ಎಸ್ ಐ ಧನಂಜಯ್ ವಂದನಾರ್ಪಣೆ ಮಾಡಿದರು. ಸಿಬ್ಬಂದಿಗಳಾದ ಮಲ್ಲಪ್ಪ, ಕಾವೇರಮ್ಮ ಕಾರ್ಯಕ್ರಮ ನಿರೂಪಿಸಿದರು.