ವೀರಾಜಪೇಟೆ, ಏ. ೧೫: ಸಂಘ-ಸAಸ್ಥೆಗಳು ತಮ್ಮ ಧ್ಯೇಯ ಉದ್ದೇಶಗಳು ಹಾಗೂ ಸಾಮಾಜಿಕ ಕಳಕಳಿಯ ತಳಹದಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತದೆ. ಅನುಷ್ಠಾನ ಮಾಡುವ ಕಾರ್ಯಗಳು ಸಮಾಜಕ್ಕೆ ಪೂರಕವಾಗಿದ್ದು ಪರಿಣಾಮಕಾರಿ ಉತ್ತರ ಲಭಿಸುವಂತಿರಬೇಕು ಎಂದು ಲಯನ್ಸ್ ವಲಯ ರಾಜ್ಯಪಾಲೆ ಬಿ.ಎಂ. ಭಾರತಿ ಅಭಿಪ್ರಾಯ ವ್ಯಕ್ತಪಡಿಸಿದರು.

ಲಯನ್ಸ್ ಕ್ಲಬ್ ಅಮ್ಮತ್ತಿ ಮತ್ತು ಲಯನ್ಸ್ ಕ್ಲಬ್ ಸಿದ್ದಾಪುರ ಜಂಟಿ ಆಶ್ರಯದಲ್ಲಿ ಅಮ್ಮತ್ತಿ ಕೊಡವ ಸಮಾಜದ ಸಭಾಂಗಣದಲ್ಲಿ ರಾಜ್ಯಪಾಲರ ಅಧಿಕೃತ ಭೇಟಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಬಿ.ಎಂ. ಭಾರತಿ, ಸಂಘ-ಸAಸ್ಥೆಗಳನ್ನು ಹುಟ್ಟು ಹಾಕುವುದು ಸುಲಭ. ಆದರೆ ಸರಿಯಾಗಿ ಪಥದಲ್ಲಿ ನಡೆಸಿಕೊಂಡು ಹೋಗುವುದು ಪ್ರಾಯಸದ ಕೆಲಸ. ಸಮಾಜಮುಖಿ ಕಾರ್ಯಗಳು ವ್ಯಕ್ತಿಯಿಂದಾಗಲಿ. ಸಂಸ್ಥೆಯಿAದಾಗಲಿ ಗುರಿಯು ಸಮಾಜಕ್ಕೆ ಉಪಯುಕ್ತವಾಗಿದೆಯೆ ಎಂದು ತಿಳಿಯುವುದು ಸೂಕ್ತ. ಈ ನಿಟ್ಟಿನಲ್ಲಿ ಲಯನ್ಸ್ ಕ್ಲಬ್ ವಲಯದಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನುಷ್ಠಾನದ ಹೊಸ್ತಿಲಲ್ಲಿದೆ. ಮಂಗಳೂರು ಪ್ರತಿಷ್ಠಿತ ಆಸ್ಪತ್ರೆಯಾದ ಡಾ. ಶಾಂತರಾA ಶೆಟ್ಟಿ ಅವರೊಂದಿಗೆ ಒಡಂಬಡಿಕೆ ಮಾಡಿಕೊಂಡು ಸುಮಾರು ೧೦೦ ಮಂದಿಗೆ ಕೃತಕ ಕಾಲು ಜೋಡಣೆ ಕಾರ್ಯಕ್ರಮ ಚಾಲ್ತಿಯಲ್ಲಿದ್ದು ಶೇ. ೭೦ ರಷ್ಟು ಮಂದಿಯು ಕಾರ್ಯಕ್ರಮದ ಉಪಯೋಗ ಪಡೆದುಕೊಂಡಿದ್ದಾರೆ. ಉಳಿದ ಶೇ. ೩೦ ರಷ್ಟು ಭಾಗದ ಕಾರ್ಯವು ಸ್ಥಗಿತಗೊಂಡಿದ್ದು ಇದು ಪರಿಪೂರ್ಣವಾಗಬೇಕು. ಕ್ಲಬ್‌ಗಳು ನೆರವಿನ ಸಹಾಯಹಸ್ತ ನೀಡುವಂತೆ ಮನವಿ ಮಾಡಿದರು.

ಲಯನ್ಸ್ ಕ್ಲಬ್ ಅಮ್ಮತ್ತಿ ಅಧ್ಯಕ್ಷೆ ಆರತಿ ಕಾರ್ಯಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಮ್ಮತ್ತಿ ಲಯನ್ಸ್ ಕ್ಲಬ್‌ನ ಕಾರ್ಯದರ್ಶಿ ಕೃತಿನಾ ಪೂಣಚ್ಚ ಮತ್ತು ಲಯನ್ಸ್ ಕ್ಲಬ್ ಸಿದ್ದಾಪುರ ಕಾರ್ಯದರ್ಶಿ ಕುರಿಯನ್ ಜಾರ್ಜ್ ಅವರುಗಳು ಕ್ಲಬ್‌ಗಳ ವಾರ್ಷಿಕ ವರದಿಯನ್ನು ವಾಚಿಸಿದರು. ವೇದಿಕೆಯಲ್ಲಿ ಉಬಯ ಕ್ಲಬ್ ಗಳಿಂದ ರಾಜ್ಯಪಾಲರಿಗೆ ಉದಾರ ನಿಧಿಯ ಚೆಕ್ ಹಸ್ತಾಂತರ ಮಾಡಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಸಿದ್ದಾಪುರ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಸುನೀಲ್ ಕುಕ್ಕನೂರು, ಸಿದ್ದಾಪುರ ಲಯನ್ಸ್ ಕ್ಲಬ್‌ನ ಖಜಾಂಚಿ ಕುಶಾಲಪ್ಪ, ಅಮ್ಮತ್ತಿ ಲಯನ್ಸ್ ಕ್ಲಬ್‌ನ ಖಜಾಂಚಿ ದಿನೇಶ್ ಕೋಡಿರ, ಪ್ರಾಂತ ಅಧ್ಯಕ್ಷರುಗಳಾದ ಕೆ.ಎ. ಮಹದೇವಪ್ಪ, ಕೆ. ಬೊಳ್ಳಪ್ಪ, ಸುಮನ್ ಬಿ. ಪ್ರಾದೇಶಿಕ ರಾಯಭಾರಿಗಳಾದ ಮೋಹನ್ ದಾಸ್, ಪ್ರಾದೇಶಿಕ ಅಧ್ಯಕ್ಷರು ಕನ್ನಿಕಾ ಅಯ್ಯಪ್ಪ, ಜಿಲ್ಲಾ ರಾಜ್ಯಪಾಲೆ ಬಿ.ಎಂ, ಭಾರತಿ, ಸದಸ್ಯರಾದ ಎಸ್.ಎಸ್. ಪೂಣಚ್ಚ ಉಪಸ್ಥಿತರಿದ್ದರು.

ಲಯನ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷೆ ಜ್ಯೋತಿ ಪೊನ್ನಪ್ಪ ಸೇರಿದಂತೆ ಲಯನ್ಸ್ ಕ್ಲಬ್ ಅಮ್ಮತ್ತಿ ಸಿದ್ದಾಪುರ ಕ್ಲಬ್‌ಗಳ ಸದಸ್ಯರು, ಜಿಲ್ಲೆಯ ವಿವಿಧ ಸ್ಥಳಗಳ ಲಯನ್ಸ್ ಕ್ಲಬ್‌ನ ಪದಾಧಿಕಾರಿಗಳು, ಹೊರ ಜಿಲ್ಲೆಯ ಲಯನ್ಸ್ ಕ್ಲಬ್‌ನ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಲಯನ್ಸ್ ಕ್ಲಬ್ ಸಿದ್ದಾಪುರದ ಅಧ್ಯಕ್ಷ ಸುನೀಲ್ ಕುಕ್ಕನೂರು ಸ್ವಾಗತಿಸಿದರು. ಅಮ್ಮತ್ತಿ ಲಯನ್ಸ್ ಕ್ಲಬ್‌ನ ಸದಸ್ಯ ಎಸ್.ಎಸ್. ಪೂಣಚ್ಚ ವಂದಿಸಿದರು.